ಹುಕ್ಕೇರಿ: ರಾಜ್ಯದ ಬೀದರ, ಶಿವಮೊಗ್ಗ, ಸಾಗರ ಧಾರವಾಡ ಸೇರಿದಂತೆ ವಿವಿಧೆಡೆ ಸಿ.ಇ.ಟಿ ಪರೀಕ್ಷೆಯಲ್ಲಿ ಜನಿವಾರಕ್ಕೆ ಅಧಿಕಾರಿಗಳು ಅಪಚಾರವೆಸಗಿದ್ದಾರೆ. ಕಾರಣ ಇದನ್ನು ಖಂಡಿಸಿ ಹುಕ್ಕೇರಿ ಪಟ್ಟಣದಲ್ಲಿ ಬುಧವಾರ ದಿ.23ರಂದು ಮುಂಜಾನೆ 10-30ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬ್ರಾಹ್ಮಣ ಸಮಾಜದ ಮುಖಂಡ ಅರವಿಂದ ದೇಶಪಾಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುಕ್ಕೇರಿಯಲ್ಲಿ ರವಿವಾರದಂದು ಜರುಗಿದ ಬ್ರಾಹ್ಮಣ ಮತ್ತು ಇತರ ಸಮಾಜ ಬಾಂಧವರ ಸಭೆಯಲ್ಲಿ ಹಿಂದೂ ಧರ್ಮದ ಅಸ್ಮಿತೆ ಹಾಗೂ ಧಾರ್ಮಿಕ ಭಾವನೆಗೆ ದಕ್ಕೆ ತಂದಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ಜನಿವಾರ ಧರಿಸುವ ಬ್ರಾಹ್ಮಣ, ಜೈನರು, ರಜಪೂತ, ವಿಶ್ವಕರ್ಮ, ಪತ್ತಾರ ಮತ್ತು ಮರಾಠಾ ಸಮಾಝ ಬಾಂಧವರು ಹೆಚ್ಚಿನ ಪ್ರಮಾಣ ಪ್ರತಿಭಟನೆಗೆ ಆಗಮಿಸಬೇಕೆಂದು ಪ್ರಕಟಣೆ ಮೂಲಕ ಕೋರಿದ್ದಾರೆ.




