ನೂತನ ತಹಸೀಲ್ದಾರ ಆಗಿ ನೇಮಕವಾದ ಬಲರಾಮ ಕಟ್ಟಿಮನಿ
ಹುಕ್ಕೇರಿ: ತಾಲೂಕಿಗೆ ನೂತನ ತಹಶೀಲ್ದಾರ್ ಆಗಿ ಬಲರಾಮ ಕಟ್ಟಿಮನಿ ಅವರನ್ನ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಂದಾಯ ಇಲಾಖೆ ಸರಕಾರದ ಆಧೀನ ಕಾರ್ಯದರ್ಶಿ ಮುಕ್ತಾರ ಪಾಷ್ ಎಚ್.ಜಿ ಅವರು ಬುಧವಾರದಂದು ಹೊರಡಿಸಿದ 59 ತಹಸೀಲ್ದಾರ ವರ್ಗಾವಣೆ ಆದೇಶದ ಪ್ರಕಾರ ಈ ಹಿಂದೆ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಹುಕ್ಕೇರಿಯಲ್ಲಿ ಕಾರ್ಯ ನಿರ್ವಹಿಸಿದ್ದ ಮತ್ತು ಮುದ್ದೆಬೀಹಾಳ ತಾಲೂಕಿನಲ್ಲಿ ತಹಶೀಲ್ದಾರ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬಲರಾಮ ಕಟ್ಟಿಮನಿ ಅವರನ್ನು ತಹಶೀಲ್ದಾರ್ ಮಂಜುಳಾ ನಾಯಕ ಅವರ ಸ್ಥಾನಕ್ಕೆ ಗ್ರೇಡ್ 1 ತಹಶೀಲ್ದಾರ ಆಗಿ ವರ್ಗಾಯಿಸಿರುವರು.














